ವಾರ್ಷಿಕೋತ್ಸವದ ಸಂಭ್ರಮ ಜುಲೈ ಮಾಸ 2020
ಸ್ನೇಹಿತರೇ,
ನಲ್ಮೆಯ ಕವಿಮನಗಳೇ ಎಲ್ಲರಿಗೂ ನಮಸ್ಕಾರ.
ನಮ್ಮ ಸಂಸ್ಥೆ ಪ್ರಾರಂಭವಾಗಿ ಒಂದು ವರುಷವಾಯಿತು. ಈ ವಾರ್ಷಿಕೋತ್ಸವದ ಸುಸಮಯದಲ್ಲಿ, ನಮ್ಮ ಜೊತೆಗೆ ನಿರಂತರವಾಗಿರುವ ಕವಿಮಿತ್ರರಾದ ನಿಮಗೆ ಅಭಿನಂದನೆಗಳು🌷 ಅಲ್ಲದೇ ಒಂದು ಕೋರಿಕೆಯಿದೆ.
ನಿಮ್ಮ ಕಿರುಪರಿಚಯವನ್ನು ನಮಗೆ ಮಾಡಿಕೊಡಬೇಕಾಗಿ ಆಶಿಸುತ್ತೇವೆ. ಹಾಗಾಗಿ ನಾವೇ ನಿಮ್ಮಲ್ಲಿ ವೈಯಕ್ತಿಕವಾಗಿ ಕೇಳಿಕೊಳ್ಳುತ್ತೇವೆ. ನಮಗೆ ಬರೆದು ಕಳುಹಿಸಬೇಕಾಗಿ ವಿನಂತಿ.
ಪ್ರಪ್ರಥಮವಾಗಿ "ಸಾಹಿತ್ಯ ಸಂಕ್ರಾಂತಿ" - ತಿಂಗಳ ಸ್ಪರ್ಧೆ "ರಾಜ್ಯಮಟ್ಟದ ಚುಟುಕು ಸ್ಪರ್ಧೆ" ಏರ್ಪಡಿಸಿ ಮೊದಲ ಮೂವರು ವಿಜೇತರಿಗೆ ಮೊಮೆಂಟೋವನ್ನು ನೀಡಿದ್ದೆವು.
ಅದರಲ್ಲಿ ವಿಜೇತರಾದ @YQ Pradip ಪ್ರದೀಪ್ ಅವರು ಮತ್ತು @Mahantesh Maganura ಮಹಾಂತೇಶ ಮಾಗನೂರ ಅವರು ನಮ್ಮ ಜೊತೆಗೆ ಇದ್ದಾರೆ.
ಅಲ್ಲದೇ ತದನಂತರ ಹೊಸ-ಹೊಸ ಕವಿಗಳು, ಯುವ ಬರಹಗಾರರ ಪರಿಚಯ ಕೂಡ ಆಗಿದೆ. ಹಿರಿಯರು ಕಿರಿಯರು ಎಲ್ಲರೂ ಜೊತೆಗೆ ಇರುವುದು ನೋಡಿ ಖುಷಿಯಾಗುತ್ತದೆ. ಒಂದಷ್ಟು ಬರಹಗಾರರು ಬಂದು-ಹೋದವರು ಇದ್ದಾರೆ. ಪರವಾಗಿಲ್ಲ.
ಪ್ರತಿದಿನ ಮುಂಜಾನೆಮಾತು, ಕಿರುಲೇಖನ , ಉಲ್ಲೇಖಗಳು, ಹನಿಗವನ, ಷಟ್ಪದಿಯಲ್ಲಿ ಕವನ, ಗಜಲ್, ಕವನಗಳು, ಹೀಗೆ ನಾನಾ ಪ್ರಕಾರದ ಬರಹಗಳನ್ನು ಪೋಸ್ಟ್ ಮಾಡುತ್ತಿರುವುದು ಖುಷಿಯಾಗುತ್ತದೆ. ಅಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸುವುದೂ ಸಂತಸದ ವಿಷಯ. ನೀವೂ ಕೂಡ ಎಲ್ಲರ ಬರಹಗಳನ್ನು ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿರಿ.
ಪ್ರತಿದಿನದ ಸ್ಪರ್ಧೆಯಲ್ಲಿ ಭಾಗವಹಿಸಿರಿ. ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ ,ಮಕ್ಕಳ ಪದ್ಯಗಳಿಗೆ ಅದರದೇ ಆದ ಚೌಕಟ್ಟಿರುವುದು. ಲಯಬದ್ಧವಾಗಿ, ಪ್ರಾಸ ಭರಿತವಾಗಿ ಬರೆಯಲೇಬೇಕಾಗುವುದು. ಅದರ ಕಡೆಗೆ ಗಮನ ಹರಿಸಿರಿ.
ನಾವು ಎಲ್ಲಿಯೂ ಯಾರ ಪರವಾಗಿ ಆಯ್ಕೆ ಮಾಡುತ್ತಿಲ್ಲ. ನಿರ್ಣಾಯಕರು ಸರಿಯಾಗಿ ಬರೆದವರನ್ನು ಮಾತ್ರ ಆಯ್ಕೆ ಮಾಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ನಮ್ಮ ನಿರ್ಣಾಯಕರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೂ ಈ ಸಮಯದಲ್ಲಿ ವಂದನೆಗಳನ್ನು💐 ತಿಳಿಸ ಬಯಸುವೆನು.
ಎಲ್ಲರಿಗೂ ಶುಭವಾಗಲಿ💐.
ಪ್ರೊ. ಕೆ. ಎಸ್. ಮುರುಳೀಧರ್
ಸಂಸ್ಥಾಪಕ ಅಧ್ಯಕ್ಷರು
ಶ್ರೀಮತಿ ತುಳಸಿ ( ಸಿಂಧು ಭಾರ್ಗವ್ )
ಉಪಾಧ್ಯಕ್ಷರು
ಮತ್ತು
ನಿರ್ಣಾಯಕರ ಬಳಗ
ನವಪರ್ವ ಫೌಂಡೇಶನ್ (ರಿ.) ಬೆಂಗಳೂರು